ದಿನಾಂಕ:6.6:2022 ರಂದು ಎಚ್.ಡಿ.ಕೋಟೆ ತಾಲ್ಲೂಕಿನ ಹೊಮ್ಮರಗಳ್ಳಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಿಸರ್ಗ ಫೌಂಡೇಶನ್ ಮಕ್ಕಳ ಸಹಾಯವಾಣಿ -1098 ವತಿಯಿಂದ ತೆರೆದಮನೆ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು .ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅಲಮೇಲಮ್ಮ ಚಿನ್ನಸ್ವಾಮಿ ರವರು ವಹಿಸಿದ್ದರು. ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಜಿಲ್ಲಾ ಮಕ್ಕಳ ಸಹಾಯವಾಣಿ ಸಂಯೋಜಕರಾದ ಧನರಾಜ್ ರವರು, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿಗಳಾದ ಶ್ರೀಮತಿ ಅರುಂಧತಿರವರು, ಹಿರಿಯ ಮಕ್ಕಳಾ ಕಲ್ಯಾಣಾ ಧಿಕಾರಿಗಳ ಸಹಾಯಕರಾದ ಶ್ರೀಯುತ ರಾಮ ಪ್ರಸಾದ್ ರವರು ಹಾಗೂ ಶ್ರೀಯುತ ಪ್ರಸನ್ನಕುಮಾರ್ ರವರು ಉಪಪ್ರಾಂಶುಪಾಲರಾದ ಗೀತಾರವರು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಪರಸುರಾಮ್ ರವರು,ಪಂಚಾಯಿತಿ ಅಭಿರುದ್ದಿ ಅಧಿಕಾರಿಗಳಾದ ಕೃಷ್ಣಮೂರ್ತಿ ರವರು,ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಯ್ಯರವರು,ಮಕ್ಕಳ ಸಹಾಯವಾಣಿ ತಾಲ್ಲೂಕು ಸಂಯೋಜಕರಾದ ಚಿಕ್ಕತಿಮ್ಮನಾಯ್ಕ ರವರು ಸಹಾಯವಾಣಿ ಸಿಬ್ಬಂದಿಗಳಾದ ವಾಸಿಂಪಾಷಾರವರು, ನಿರ್ಮಲಾ ರವರು, ಶಿಕ್ಷಕರು ,ಪೋಷಕರು ಹಾಗೂ 150 ಕ್ಕಿಂತ ಹೆಚ್ಚು ಮಕ್ಕಳು ಬಾಗವಹಿಸಿದ್ದರು.